Local cover image
Local cover image
Image from Google Jackets

Purvapara ಪೂರ್ವಾಪರ

By: Material type: TextTextLanguage: Kannada Publication details: Sagara Akshara Prakashana 1990Description: xx,312Subject(s): DDC classification:
  • K894.4 ANAP
Summary: ’ಪೂರ್ವಾಪರ’ ಲೇಖನಗಳನ್ನು ರೂಢಿಯಂತೆ ಸಾಹಿತ್ಯಕ-ಸಾಂಸ್ಕೃತಿಕ-ರಾಜಕೀಯ- ಸಾಮಾಜಿಕ-ತಾತ್ವಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ. ಬದುಕಿನ ಎಲ್ಲ ಸಂಗತಿಗಳನ್ನು ಗ್ರಹಿಸಲು ಹೋಗುವ ಸಾಹಸಗಳು. ಮೊದಲ ಲೇಖನದಲ್ಲಯೇ ಮೌನಕಣಿವೆ ಮತ್ತು ಚರಾಚರ ಜಗತ್ತಿನ ನಡುವೆ ಇದ್ದಿರಬಹುದಾದ ಸಂಬಂಧಜಾಲದ ಪ್ರಸ್ತಾಪವಿದೆ. ಸಂಕೀರ್ಣ ಸಂಬಂಧಜಾಲದ ಈ ಪೂರ್ವಾಪರ ಪ್ರಜ್ಞೆ ಲೇಖಕರ ಗಹಿಕೆಯಲ್ಲಿ ಅಂತರ್ಗತವಾಗಿದೆ. ಅದು ಈ ಸಂಕಲನದ ಎಲ್ಲ ಲೇಖನಗಳಿಗೆ ಆಧಾರ ಶ್ರುತಿಯಾಗಿದೆ. ವಸ್ತುನಿಷ್ಟ ವಿಮರ್ಶೆಯೆಂಬ ಭ್ರಮೆಯಾಗಲಿ ದರ್ಪವಾಗಲಿ ಇಲ್ಲಿ ಕಾಣಿಸುವುದಿಲ್ಲ. ಓದುಗರನ್ನು ಲೇಖಕ ಒಳಗೊಳಿಸಿಕೊಳ್ಳುತ್ತಲೇ ಹೋಗುವುದರಿಂದ ವ್ಯಕ್ತಿನಿಷ್ಠೆಯ ಅಹಂಕಾರ ವಿಕಾರಗಳೂ ಗೋಚರಿಸುವುದಿಲ್ಲ. ಈ ಬರಹಗಳ ನಿಷ್ಠೆಯು ಸಮೂಹ ನಿಷ್ಠೆ, ಸಮಾಜ ನಿಷ್ಠೆ, ಸಮತ್ವ ನಿಷ್ಠೆಯಾಗಿದೆ. ವಿವಿಧ ಸಂಗತಿಗಳ ಬಗ್ಗೆ ಜತೆಗಾರ ಸಹೃದಯ ಸಾಮಾಜಿಕರೊಡನೆ ಚರ್ಚಿಸಿಕೊಳ್ಳುತ್ತ ಧೀಮಂತಿಕೆಯಿಂದ ದಾಖಲಿಸುತ್ತ ಹೋಗುತ್ತವೆ. ವಿಮರ್ಶಾತ್ಮಕ-ಸೃಜನಾತ್ಮಕವೆಂಬ ವಿಂಗಡಣೆಯನ್ನು ಮೀರಿ ನಿಲ್ಲುವ ಬರಹಗಳಿವು. ಪೂರ್ವ ಪಶ್ಚಿಮ ಸಂಸ್ಕೃತಿಗಳು ಒಂದಕ್ಕೊಂದು ಸಂಧಿಸಿ ಕಡಲು ಕಡೆದಂತೆ ಅಲ್ಲೋಲ ಕಲ್ಲೋಲ ಎದ್ದ ಅಸಾಧಾರಣ ಶತಮಾನ. ಇಂತಹ ಶತಮಾನದಿಂದ ಹರಳುಗಟ್ಟಿಕೊಂಡ ಅನಂತಮೂರ್ತಿಯವರ ಈ ಅನುಭವ ಪುಸ್ತಕ . ಲೇಖಕರ ನಾಲ್ಕನೆಯ ವಿಮರ್ಶಾ ಸಂಕಲನ. ನಮ್ಮ ಸಮಾಜ, ಸಂಸ್ಕೃತಿ, ಸಾಹಿತ್ಯಗಳನ್ನು ಅರ್ಥೈಸಿಕೊಳ್ಳಲು ಅನಂತಮೂರ್ತಿ ಈ ಕೃತಿ ಸಹಾಯಕವಾಗಿದೆ.
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Kannada K894.4 ANAP (Browse shelf(Opens below)) Available 044177
Total holds: 0

’ಪೂರ್ವಾಪರ’ ಲೇಖನಗಳನ್ನು ರೂಢಿಯಂತೆ ಸಾಹಿತ್ಯಕ-ಸಾಂಸ್ಕೃತಿಕ-ರಾಜಕೀಯ- ಸಾಮಾಜಿಕ-ತಾತ್ವಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ. ಬದುಕಿನ ಎಲ್ಲ ಸಂಗತಿಗಳನ್ನು ಗ್ರಹಿಸಲು ಹೋಗುವ ಸಾಹಸಗಳು. ಮೊದಲ ಲೇಖನದಲ್ಲಯೇ ಮೌನಕಣಿವೆ ಮತ್ತು ಚರಾಚರ ಜಗತ್ತಿನ ನಡುವೆ ಇದ್ದಿರಬಹುದಾದ ಸಂಬಂಧಜಾಲದ ಪ್ರಸ್ತಾಪವಿದೆ. ಸಂಕೀರ್ಣ ಸಂಬಂಧಜಾಲದ ಈ ಪೂರ್ವಾಪರ ಪ್ರಜ್ಞೆ ಲೇಖಕರ ಗಹಿಕೆಯಲ್ಲಿ ಅಂತರ್ಗತವಾಗಿದೆ. ಅದು ಈ ಸಂಕಲನದ ಎಲ್ಲ ಲೇಖನಗಳಿಗೆ ಆಧಾರ ಶ್ರುತಿಯಾಗಿದೆ.
ವಸ್ತುನಿಷ್ಟ ವಿಮರ್ಶೆಯೆಂಬ ಭ್ರಮೆಯಾಗಲಿ ದರ್ಪವಾಗಲಿ ಇಲ್ಲಿ ಕಾಣಿಸುವುದಿಲ್ಲ. ಓದುಗರನ್ನು ಲೇಖಕ ಒಳಗೊಳಿಸಿಕೊಳ್ಳುತ್ತಲೇ ಹೋಗುವುದರಿಂದ ವ್ಯಕ್ತಿನಿಷ್ಠೆಯ ಅಹಂಕಾರ ವಿಕಾರಗಳೂ ಗೋಚರಿಸುವುದಿಲ್ಲ. ಈ ಬರಹಗಳ ನಿಷ್ಠೆಯು ಸಮೂಹ ನಿಷ್ಠೆ, ಸಮಾಜ ನಿಷ್ಠೆ, ಸಮತ್ವ ನಿಷ್ಠೆಯಾಗಿದೆ. ವಿವಿಧ ಸಂಗತಿಗಳ ಬಗ್ಗೆ ಜತೆಗಾರ ಸಹೃದಯ ಸಾಮಾಜಿಕರೊಡನೆ ಚರ್ಚಿಸಿಕೊಳ್ಳುತ್ತ ಧೀಮಂತಿಕೆಯಿಂದ ದಾಖಲಿಸುತ್ತ ಹೋಗುತ್ತವೆ. ವಿಮರ್ಶಾತ್ಮಕ-ಸೃಜನಾತ್ಮಕವೆಂಬ ವಿಂಗಡಣೆಯನ್ನು ಮೀರಿ ನಿಲ್ಲುವ ಬರಹಗಳಿವು. ಪೂರ್ವ ಪಶ್ಚಿಮ ಸಂಸ್ಕೃತಿಗಳು ಒಂದಕ್ಕೊಂದು ಸಂಧಿಸಿ ಕಡಲು ಕಡೆದಂತೆ ಅಲ್ಲೋಲ ಕಲ್ಲೋಲ ಎದ್ದ ಅಸಾಧಾರಣ ಶತಮಾನ. ಇಂತಹ ಶತಮಾನದಿಂದ ಹರಳುಗಟ್ಟಿಕೊಂಡ ಅನಂತಮೂರ್ತಿಯವರ ಈ ಅನುಭವ ಪುಸ್ತಕ .
ಲೇಖಕರ ನಾಲ್ಕನೆಯ ವಿಮರ್ಶಾ ಸಂಕಲನ. ನಮ್ಮ ಸಮಾಜ, ಸಂಸ್ಕೃತಿ, ಸಾಹಿತ್ಯಗಳನ್ನು ಅರ್ಥೈಸಿಕೊಳ್ಳಲು ಅನಂತಮೂರ್ತಿ ಈ ಕೃತಿ ಸಹಾಯಕವಾಗಿದೆ.

There are no comments on this title.

to post a comment.

Click on an image to view it in the image viewer

Local cover image