Local cover image
Local cover image
Image from Google Jackets

Ani aradala siri singara: bhutaradhaneya ani vaividhya bannagarike ಆಣಿ ಅರದಳ ಸಿರಿ ಸಿಂಗಾರ: ಭೂತಾರಾಧನೆಯ ಅಣಿ ವೈವಿಧ್ಯ ಬಣ್ಣಗಾರಿಕೆ

By: Contributor(s): Material type: TextTextLanguage: Kannada Publication details: Mumbai - 2016Description: xxiv,379Subject(s): DDC classification:
  • 398.2K RAVA
Summary: ಎಚ್ ಬಿ ಎಲ್ ರಾವ್ ಸಂಪಾದಿಸಿ ಪ್ರಕಟಿಸಿದ ಅಣಿ ಅರದಳ ಸಿರಿ ಸಿಂಗಾರ ಗ್ರಂಥಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಕೊಡುವ 2016ನೇ ಸಾಲಿನ ಪುಸ್ತಕ ಸೊಗಸು ಪ್ರಶಸ್ತಿ ಬಂದಿದೆ. ಮುಂಬಯಿಯ ಸಾಹಿತ್ಯ ಬಳಗ ಪ್ರಕಟಿಸಿದ ” ಅಣಿ ಅರದಲ – ಸಿರಿ ಸಿಂಗಾರ ” ಗ್ರಂಥವು ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ , ಗೋವಿಂದ ಪೈ ಸಂಶೋಧನಾ ಕೇಂದ್ರ – ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರಘಟಕ, ಜಂಟಿಯಾಗಿ ಆಯೋಜಿಸಿದ್ದ ಭೂತಾರಾಧನೆಯ ಕೋಲ ,ನೇಮ ಮುಂತಾದ ಸಂದರ್ಭಗಳಲ್ಲಿ ವೈಭವದ ಸಂಕೇತವಾಗಿ ಬಳಸುವ ” ಅಣಿ “ಗಳ ನಿರ್ಮಾಣ ಮತ್ತು ಬಣ್ಣಗಾರಿಕೆಯ ಕುರಿತು ಮೂರು ದಿನ ನಡೆದ ಅಧ್ಯಯನ ಕಮ್ಮಟದ ಹುಟ್ಟುವಳಿಯನ್ನು ಪ್ರಧಾನವಾಗಿ ಇರಿಸಿಕೊಂಡು ಪ್ರಕಟವಾಗಿದೆ . ಸುಮಾರು ಐವತ್ತು ಮಂದಿ ಕಲಾವಿದರು(ಪಂಬದರು ಮತ್ತು ಪಾಣರು), ವಿಷಯ ತಜ್ಞರು , ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವೈ.ಎನ್. ಶೆಟ್ಟಿ , ಡಾ.ಅಶೋಕ ಆಳ್ವ , ಕೆ.ಎಲ್ ಕುಂಡಂತಾಯ ಅವರು ಕಲಾವಿದರ ತಂಡವನ್ನು ನಿರ್ಧರಿಸಿ ಕಮ್ಮಟವನ್ನು ನೇರ್ಪುಗೊಳಿಸಿದ್ದರು . ಎಂ .ಜಿ .ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು , ಲಚ್ಚೇಂದ್ರ ದಾಖಲೀಕರಣದ ಜವಾಬ್ದಾರಿವಹಿಸಿದ್ದರು .ಯಜ್ಞ , ಆಸ್ಟ್ರೋಮೋಹನ್ , ಹರ್ಷ ಅವರ ಫೋಟೋಗಳು ಗ್ರಂಥದಲ್ಲಿದೆ. ಪ್ರಧಾನ ಸಂಪಾದಕನಾಗಿ ಮತ್ತು ಪ್ರಕಾಶಕರಾದ ಸಾಹಿತ್ಯ ಬಳಗದ ಪರವಾಗಿ ಎಚ್. ಬಿ.ಎಲ್ .ರಾವ್ ಅವರು ಪ್ರಾರಂಭದಲ್ಲಿ ”ಅಣಿ ಅರದಲ – ಸಿರಿ ಸಿಂಗಾರ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಮ್ಮಟವನ್ನು ಸಂಘಟಿಸಿದ್ದ ಹೆರಿಂಜೆ ಕೃಷ್ಣ ಭಟ್ಟ ಅವರು ‘ ಅಣಿ ಅರದಲ – ಸಿರಿ ಸಿಂಗಾರ : ಮೈದಾಳಿದ ವೈಭವ ‘ ಎಂದು ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ. ಈ ಅಧ್ಯಯನ ಕಮ್ಮಟವನ್ನು ಹಿರಿಯ ವಿದ್ವಾಂಸ ಏರ್ಯ ಲಕ್ಷೀನಾರಾಯಣ ಆಳ್ವ ಉದ್ಘಾಟಿಸಿದ್ದರು . ಡಾ.ಯು . ಪಿ.ಉಪಾಧ್ಯಾಯ ಉಪಸ್ಥಿತರಿದ್ದರು , ಡಾ . ವಿವೇಕ ರೈ ಅವರು ಸಮಾರೋಪ ಭಾಷಣ ಮಾಡಿದ್ದು ಮೂವರ ಭಾಷಣಗಳನ್ನೂ ಗ್ರಂಥದಲ್ಲಿ ದಾಖಲಿಸಿಕೊಳ್ಳಲಾಗಿದೆ .ಅಣಿ , ಅರದಲ , ಪದ್ದೆಯಿ ,ಸಿರಿಸಿಂಗಾರ , ಕಟಿಬಯಿರೂಪಗಳು ಈ ಐದು ವಿಭಾಗಗಳ 400 ಪುಟಗಳ ಈ ಗ್ರಂಥದಲ್ಲಿ 200ಪುಟಗಳಷ್ಟು ಬಣ್ಣದ ಪೋಟೊಗಳಿವೆ . ಅಣಿ ನಿರ್ಮಾಣದ ವಿವಿಧ ಹಂತಗಳು , ಬಣ್ಣಗಾರಿಕೆ , ಪ್ರಾಚೀನ – ಅರ್ವಾಚೀನ ಆಭರಣಗಳ ಚಿತ್ರಗಳು , ಕಮ್ಮಟದಲ್ಲಿ ಸಿದ್ಧಗೊಂಡ ವೇಷಗಳು ಹಾಗೂ ಕೊಡಿಯಡಿಯ ನೈಜ ವೇಷಗಳು ಎಂಬ ಐದು ವಿಭಾಗಗಳಲ್ಲಿ ಪೋಟೋಗಳಿವೆ . ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ , ಏರ್ಯ ಲಕ್ಷೀನಾರಾಯಣ ಆಳ್ವ , ಡಾ.ಯು .ಪಿ .ಉಪಾಧ್ಯಾಯ , ಪ್ರೊ ಅಮೃತ ಸೋಮೇಶ್ವರ , ಡಾ ಅಶೋಕ ಆಳ್ವ , ಡಾ. ಜನಾರ್ದನ ಭಟ್( ಫೋಟೋಗಳಿಗೆ ಇಂಗ್ಲೀಷಿನಲ್ಲಿ ಅಡಿಬರಹ ಬರೆದಿದ್ದಾರೆ), ಡಾ.ವೈ ಎನ್. ಶೆಟ್ಟಿ , ಡಾ. ವೆಂಕಟರಾಜ ಪುಣಿಂಚತ್ತಾಯ , ಕುಮಾರ ಸ್ವಾಮಿ, ಡಾ.ಸುಶೀಲಾ ಉಪಾಧ್ಯಾಯ , ಬಾಬು ಶಿವ ಪೂಜಾರಿ , ಡಾ ,ಲಕ್ಷ್ಮೀ ಜಿ ಪ್ರಸಾದ್ ( ಆರು ಲೇಖನಗಳು ಮತ್ತು 1435 ಬೂತಗಳ ಪಟ್ಟಿ ಗ್ರಂಥಕ್ಕಾಗಿ ಒದಗಿಸಿದ್ದಾರೆ). ವೇ.ಮೂ .ಕಮಲಾದೇವಿ ಪ್ರಸಾದ ಆಸ್ರಣ್ಣ , ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟ , ವಿದ್ವಾನ್ ಕುಮಾರ ಗುರು ತಂತ್ರಿ , ವೇ.ಮೂ . ಕೇಂಜ ಶ್ರೀಧರ ತಂತ್ರಿ ಅವರ ಲೇಖನಗಳಿವೆ . ಈ ವೈದಿಕ ವಿದ್ವಾಂಸರ ಲೇಖನಗಳನ್ನು ಬೂತಾರಾಧನಾ ವಿಭಾಗವನ್ನು ವೈದಿಕರು ಸ್ವೀಕರಿಸಿದ ವಿಧಾನವನ್ನು ಗ್ರಹಿಸಲು ಆಸಕ್ತರ ಕುತೂಹಲಕ್ಕಾಗಿ ಸೇರಿಸಿಕೊಳ್ಳಲಾಗಿದೆ . ಕೆ.ಎಲ್.ಕುಂಡಂತಾಯ ಅವರು ಗ್ರಂಥದ ಸಂಪಾದಕನಾಗಿ ಗ್ರಂಥದ ಪ್ರಸ್ತಾವನೆ : ‘ನಡುವಣ ಲೋಕದ ನಡೆಯಲ್ಲಿ’ , ಹದಿಮೂರು ಕಲಾವಿದರ ಸಂದರ್ಶನ , ಮೂರು ಲೇಖನಗಳು ಹಾಗೂ ಪಾರಿಭಾಷಿಕ ಪದಗಳ ಸಂಗ್ರಹ ಮತ್ತು ಕಟಿಬಯಿರೂಪ ವಿಭಾಗಕ್ಕೆ ಉಭಯ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚಿನ ಅಗತ್ಯ ಫೋಟೋಗಳ ಸಂಗ್ರಹ . ಇಡೀ ಗ್ರಂಥದ ಸಂಯೋಜನೆಯ ಕಾರ್ಯ ನಿರ್ವಹಿಸಿದ್ದಾರೆ . ಡಾ.ಲಕ್ಷ್ಮೀ ಜಿ ಪ್ರಸಾದ ಬರೆದಿರುವ ಬ್ರಾಹ್ಮಣ ಭೂತಗಳು , ಮುಸ್ಲಿಂ ಭೂತಗಳು,ಕುಲೆ ಭೂತಗಳು , ಕನ್ನಡ ಭೂತಗಳು ಹನುಮಂತ ಕೋಲ , ಸರ್ಪಕೋಲ ಎಂಬ ಆರು ಲೇಖನಗಳು ಹಾಗೂ ಇತರ ವಿದ್ವಾಂಸರ ಅಪೂರ್ವ ಲೇಖನಗಳಿವೆ . 200ಕ್ಕೂ ಹೆಚ್ಚು ಪಾರಿಭಾಷಿಕ ಶಬ್ದಗಳ ದಾಖಲಾತಿ ಇದೆ . ಮುಂಬಯಿಯ ಎಚ್ ಬಿ ಎಲ್ ರಾವ್ ಅವರು ಸಾಹಿತ್ಯ ಬಳಗದ ಮೂಲಕ ಈ ಗ್ರಂಥವನ್ನು ಪ್ರಕಟಿಸುವ ಸಾಹಸ ಮೆರೆದಿದ್ದಾರೆ. ಆಕರ್ಷಕ ಮುಖಪುಟ , ಪುಟವಿನ್ಯಾಸ , ಪುಸ್ತಕದ ಸುಂದರ ಸಂಯೋಜನೆ ಅದ್ಭುತ . ನಿರ್ವಹಿಸಿದ ಕಲ್ಲೂರು ನಾಗೇಶ್ ಮತ್ತೊಮ್ಮೆತಮ್ಮ ಪ್ರೌಡಿಮೆ ಪ್ರದರ್ಶಿಸಿದ್ದಾರೆ . ಬೂತ (ದೈವ) ಆರಾಧನಾ ವಿಭಾಗದ ಆಸಕ್ತರಿಗೆ, ಗೌರವವುಳ್ಳವರಿಗೆ, ಅಧ್ಯಯನ ವಿದ್ಯಾರ್ಥಿಗಳಿಗೆ ಈ ಗ್ರಂಥ ಬೂತಾರಾಧನಾಕ್ಷೇತ್ರದ ಒಂದು ಆಯಾಮದ ವಿವರಣೆಯನ್ನು, ಕಾಲ – ಸಂದರ್ಭ – ಮನೋಧರ್ಮಗಳನ್ನು ಆಧರಿಸಿಸಹಜವಾಗಿ ಸಂಭವಿಸುವ ಬದಲಾವಣೆಯ ಹಂತಗಳನ್ನು ತಿಳಿಸುತ್ತದೆ
Tags from this library: No tags from this library for this title. Log in to add tags.
Star ratings
    Average rating: 0.0 (0 votes)
Holdings
Item type Current library Collection Call number Status Barcode
Book Book St Aloysius Library Tulu 398.2K RAVA (Browse shelf(Opens below)) Available 071435
Total holds: 0

ಎಚ್ ಬಿ ಎಲ್ ರಾವ್ ಸಂಪಾದಿಸಿ ಪ್ರಕಟಿಸಿದ ಅಣಿ ಅರದಳ ಸಿರಿ ಸಿಂಗಾರ ಗ್ರಂಥಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರ ಕೊಡುವ 2016ನೇ ಸಾಲಿನ ಪುಸ್ತಕ ಸೊಗಸು ಪ್ರಶಸ್ತಿ ಬಂದಿದೆ.
ಮುಂಬಯಿಯ ಸಾಹಿತ್ಯ ಬಳಗ ಪ್ರಕಟಿಸಿದ ” ಅಣಿ ಅರದಲ – ಸಿರಿ ಸಿಂಗಾರ ” ಗ್ರಂಥವು ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರ , ಗೋವಿಂದ ಪೈ ಸಂಶೋಧನಾ ಕೇಂದ್ರ – ಕನ್ನಡ ಸಾಹಿತ್ಯ ಪರಿಷತ್ತಿನ ಮಹಾರಾಷ್ಟ್ರಘಟಕ, ಜಂಟಿಯಾಗಿ ಆಯೋಜಿಸಿದ್ದ ಭೂತಾರಾಧನೆಯ ಕೋಲ ,ನೇಮ ಮುಂತಾದ ಸಂದರ್ಭಗಳಲ್ಲಿ ವೈಭವದ ಸಂಕೇತವಾಗಿ ಬಳಸುವ ” ಅಣಿ “ಗಳ ನಿರ್ಮಾಣ ಮತ್ತು ಬಣ್ಣಗಾರಿಕೆಯ ಕುರಿತು ಮೂರು ದಿನ ನಡೆದ ಅಧ್ಯಯನ ಕಮ್ಮಟದ ಹುಟ್ಟುವಳಿಯನ್ನು ಪ್ರಧಾನವಾಗಿ ಇರಿಸಿಕೊಂಡು ಪ್ರಕಟವಾಗಿದೆ .

ಸುಮಾರು ಐವತ್ತು ಮಂದಿ ಕಲಾವಿದರು(ಪಂಬದರು ಮತ್ತು ಪಾಣರು), ವಿಷಯ ತಜ್ಞರು , ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವೈ.ಎನ್. ಶೆಟ್ಟಿ , ಡಾ.ಅಶೋಕ ಆಳ್ವ , ಕೆ.ಎಲ್ ಕುಂಡಂತಾಯ ಅವರು ಕಲಾವಿದರ ತಂಡವನ್ನು ನಿರ್ಧರಿಸಿ ಕಮ್ಮಟವನ್ನು ನೇರ್ಪುಗೊಳಿಸಿದ್ದರು . ಎಂ .ಜಿ .ಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು , ಲಚ್ಚೇಂದ್ರ ದಾಖಲೀಕರಣದ ಜವಾಬ್ದಾರಿವಹಿಸಿದ್ದರು .ಯಜ್ಞ , ಆಸ್ಟ್ರೋಮೋಹನ್ , ಹರ್ಷ ಅವರ ಫೋಟೋಗಳು ಗ್ರಂಥದಲ್ಲಿದೆ.

ಪ್ರಧಾನ ಸಂಪಾದಕನಾಗಿ ಮತ್ತು ಪ್ರಕಾಶಕರಾದ ಸಾಹಿತ್ಯ ಬಳಗದ ಪರವಾಗಿ ಎಚ್. ಬಿ.ಎಲ್ .ರಾವ್ ಅವರು ಪ್ರಾರಂಭದಲ್ಲಿ ”ಅಣಿ ಅರದಲ – ಸಿರಿ ಸಿಂಗಾರ” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ .ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಕಮ್ಮಟವನ್ನು ಸಂಘಟಿಸಿದ್ದ ಹೆರಿಂಜೆ ಕೃಷ್ಣ ಭಟ್ಟ ಅವರು ‘ ಅಣಿ ಅರದಲ – ಸಿರಿ ಸಿಂಗಾರ : ಮೈದಾಳಿದ ವೈಭವ ‘ ಎಂದು ತಮ್ಮ ಅನಿಸಿಕೆಯನ್ನು ಬರೆದಿದ್ದಾರೆ.

ಈ ಅಧ್ಯಯನ ಕಮ್ಮಟವನ್ನು ಹಿರಿಯ ವಿದ್ವಾಂಸ ಏರ್ಯ ಲಕ್ಷೀನಾರಾಯಣ ಆಳ್ವ ಉದ್ಘಾಟಿಸಿದ್ದರು . ಡಾ.ಯು . ಪಿ.ಉಪಾಧ್ಯಾಯ ಉಪಸ್ಥಿತರಿದ್ದರು , ಡಾ . ವಿವೇಕ ರೈ ಅವರು ಸಮಾರೋಪ ಭಾಷಣ ಮಾಡಿದ್ದು ಮೂವರ ಭಾಷಣಗಳನ್ನೂ ಗ್ರಂಥದಲ್ಲಿ ದಾಖಲಿಸಿಕೊಳ್ಳಲಾಗಿದೆ .ಅಣಿ , ಅರದಲ , ಪದ್ದೆಯಿ ,ಸಿರಿಸಿಂಗಾರ , ಕಟಿಬಯಿರೂಪಗಳು ಈ ಐದು ವಿಭಾಗಗಳ 400 ಪುಟಗಳ ಈ ಗ್ರಂಥದಲ್ಲಿ 200ಪುಟಗಳಷ್ಟು ಬಣ್ಣದ ಪೋಟೊಗಳಿವೆ . ಅಣಿ ನಿರ್ಮಾಣದ ವಿವಿಧ ಹಂತಗಳು , ಬಣ್ಣಗಾರಿಕೆ , ಪ್ರಾಚೀನ – ಅರ್ವಾಚೀನ ಆಭರಣಗಳ ಚಿತ್ರಗಳು , ಕಮ್ಮಟದಲ್ಲಿ ಸಿದ್ಧಗೊಂಡ ವೇಷಗಳು ಹಾಗೂ ಕೊಡಿಯಡಿಯ ನೈಜ ವೇಷಗಳು ಎಂಬ ಐದು ವಿಭಾಗಗಳಲ್ಲಿ ಪೋಟೋಗಳಿವೆ .

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ , ಏರ್ಯ ಲಕ್ಷೀನಾರಾಯಣ ಆಳ್ವ , ಡಾ.ಯು .ಪಿ .ಉಪಾಧ್ಯಾಯ , ಪ್ರೊ ಅಮೃತ ಸೋಮೇಶ್ವರ , ಡಾ ಅಶೋಕ ಆಳ್ವ , ಡಾ. ಜನಾರ್ದನ ಭಟ್( ಫೋಟೋಗಳಿಗೆ ಇಂಗ್ಲೀಷಿನಲ್ಲಿ ಅಡಿಬರಹ ಬರೆದಿದ್ದಾರೆ), ಡಾ.ವೈ ಎನ್. ಶೆಟ್ಟಿ , ಡಾ. ವೆಂಕಟರಾಜ ಪುಣಿಂಚತ್ತಾಯ , ಕುಮಾರ ಸ್ವಾಮಿ, ಡಾ.ಸುಶೀಲಾ ಉಪಾಧ್ಯಾಯ , ಬಾಬು ಶಿವ ಪೂಜಾರಿ , ಡಾ ,ಲಕ್ಷ್ಮೀ ಜಿ ಪ್ರಸಾದ್ ( ಆರು ಲೇಖನಗಳು ಮತ್ತು 1435 ಬೂತಗಳ ಪಟ್ಟಿ ಗ್ರಂಥಕ್ಕಾಗಿ ಒದಗಿಸಿದ್ದಾರೆ).

ವೇ.ಮೂ .ಕಮಲಾದೇವಿ ಪ್ರಸಾದ ಆಸ್ರಣ್ಣ , ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟ , ವಿದ್ವಾನ್ ಕುಮಾರ ಗುರು ತಂತ್ರಿ , ವೇ.ಮೂ . ಕೇಂಜ ಶ್ರೀಧರ ತಂತ್ರಿ ಅವರ ಲೇಖನಗಳಿವೆ . ಈ ವೈದಿಕ ವಿದ್ವಾಂಸರ ಲೇಖನಗಳನ್ನು ಬೂತಾರಾಧನಾ ವಿಭಾಗವನ್ನು ವೈದಿಕರು ಸ್ವೀಕರಿಸಿದ ವಿಧಾನವನ್ನು ಗ್ರಹಿಸಲು ಆಸಕ್ತರ ಕುತೂಹಲಕ್ಕಾಗಿ ಸೇರಿಸಿಕೊಳ್ಳಲಾಗಿದೆ .

ಕೆ.ಎಲ್.ಕುಂಡಂತಾಯ ಅವರು ಗ್ರಂಥದ ಸಂಪಾದಕನಾಗಿ ಗ್ರಂಥದ ಪ್ರಸ್ತಾವನೆ : ‘ನಡುವಣ ಲೋಕದ ನಡೆಯಲ್ಲಿ’ , ಹದಿಮೂರು ಕಲಾವಿದರ ಸಂದರ್ಶನ , ಮೂರು ಲೇಖನಗಳು ಹಾಗೂ ಪಾರಿಭಾಷಿಕ ಪದಗಳ ಸಂಗ್ರಹ ಮತ್ತು ಕಟಿಬಯಿರೂಪ ವಿಭಾಗಕ್ಕೆ ಉಭಯ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚಿನ ಅಗತ್ಯ ಫೋಟೋಗಳ ಸಂಗ್ರಹ . ಇಡೀ ಗ್ರಂಥದ ಸಂಯೋಜನೆಯ ಕಾರ್ಯ ನಿರ್ವಹಿಸಿದ್ದಾರೆ .

ಡಾ.ಲಕ್ಷ್ಮೀ ಜಿ ಪ್ರಸಾದ ಬರೆದಿರುವ ಬ್ರಾಹ್ಮಣ ಭೂತಗಳು , ಮುಸ್ಲಿಂ ಭೂತಗಳು,ಕುಲೆ ಭೂತಗಳು , ಕನ್ನಡ ಭೂತಗಳು ಹನುಮಂತ ಕೋಲ , ಸರ್ಪಕೋಲ ಎಂಬ ಆರು ಲೇಖನಗಳು ಹಾಗೂ ಇತರ ವಿದ್ವಾಂಸರ ಅಪೂರ್ವ ಲೇಖನಗಳಿವೆ . 200ಕ್ಕೂ ಹೆಚ್ಚು ಪಾರಿಭಾಷಿಕ ಶಬ್ದಗಳ ದಾಖಲಾತಿ ಇದೆ .

ಮುಂಬಯಿಯ ಎಚ್ ಬಿ ಎಲ್ ರಾವ್ ಅವರು ಸಾಹಿತ್ಯ ಬಳಗದ ಮೂಲಕ ಈ ಗ್ರಂಥವನ್ನು ಪ್ರಕಟಿಸುವ ಸಾಹಸ ಮೆರೆದಿದ್ದಾರೆ. ಆಕರ್ಷಕ ಮುಖಪುಟ , ಪುಟವಿನ್ಯಾಸ , ಪುಸ್ತಕದ ಸುಂದರ ಸಂಯೋಜನೆ ಅದ್ಭುತ . ನಿರ್ವಹಿಸಿದ ಕಲ್ಲೂರು ನಾಗೇಶ್ ಮತ್ತೊಮ್ಮೆತಮ್ಮ ಪ್ರೌಡಿಮೆ ಪ್ರದರ್ಶಿಸಿದ್ದಾರೆ .

ಬೂತ (ದೈವ) ಆರಾಧನಾ ವಿಭಾಗದ ಆಸಕ್ತರಿಗೆ, ಗೌರವವುಳ್ಳವರಿಗೆ, ಅಧ್ಯಯನ ವಿದ್ಯಾರ್ಥಿಗಳಿಗೆ ಈ ಗ್ರಂಥ ಬೂತಾರಾಧನಾಕ್ಷೇತ್ರದ ಒಂದು ಆಯಾಮದ ವಿವರಣೆಯನ್ನು, ಕಾಲ – ಸಂದರ್ಭ – ಮನೋಧರ್ಮಗಳನ್ನು ಆಧರಿಸಿಸಹಜವಾಗಿ ಸಂಭವಿಸುವ ಬದಲಾವಣೆಯ ಹಂತಗಳನ್ನು ತಿಳಿಸುತ್ತದೆ

There are no comments on this title.

to post a comment.

Click on an image to view it in the image viewer

Local cover image