Su Ram Ekkundiyaravara kavya ಸು. ರಂ. ಎಕ್ಕುಂಡಿಯವರ ಕಾವ್ಯ
- Bengaluru Karnataka Sahitya Akademi 1993
- 8,60
‘ಸು. ರಂ. ಎಕ್ಕುಂಡಿಯವರ ಕಾವ್ಯ’ ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸುವ ವಿಚಾರ ಸಂಕಿರಣಗಳಲ್ಲಿ ಮಂಡಿತವಾದ ಪ್ರಬಂಧಗಳ ಸಂಕಲನ. ವಿಚಾರ ಸಂಕಿರಣ ಮಾಲೆಯಲ್ಲಿ ಅನೇಕ ಉಪಯುಕ್ತ ಕೃತಿಗಳು ಹೊರಬಂದು ಮೌಲಿಕ ವಿಮರ್ಶೆಗೆ ಕಾರಣವಾಗಿದೆ. ಹಿರಿಯ ಕವಿ ಸು.ರಂ. ಎಕ್ಕುಂಡಿಯವರ ಕಾವ್ಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಅವರ ಕಾವ್ಯದ ಬಗ್ಗೆ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸುವ ಮೂಲಕ ಗೌರವ ಪ್ರಕಟಿಸಿತು. ಆ ವಿಚಾರ ಸಂಕಿರಣದ ಪ್ರಬಂಧಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ಎಕ್ಕುಂಡಿಯವರ ಕಾವ್ಯದಲ್ಲಿ ಪರಂಪರೆಯ ನೋಟ, ಎಂ. ಜಿ. ಚಂದ್ರಶೇಖರಯ್ಯನವರ ಎಕ್ಕುಂಡಿಯವರ ಕಾವ್ಯ ಮತ್ತು ಪ್ರಗತಿಶೀಲ ಸಾಹಿತ್ಯ, ಟಿ.ಪಿ. ಅಶೋಕ ಅವರ ಸು.ರಂ. ಎಕ್ಕುಂಡಿ ಅವರ ಕಥನ ಕವನದ ನೆಲೆಗಳು ಸೇರಿದಂತೆ ಹಿರಿಯ ಲೇಖಕರ ಹಲವು ಮಹತ್ವದ ಪ್ರಬಂಧಗಳಿವೆ.