ಬೇರು-ಕಾಂಡ ಮತ್ತು ಚಿಗುರು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದ್ದ ಕೆ.ವಿ. ನಾರಾಯಣ ಅವರ ಪುಸ್ತಕವನ್ನು ’ಇದುವರೆಗಿನ ಬರೆಹಗಳು’ ಸರಣಿಯ ’ತೊಂಡುಮೇವು’ನಲ್ಲಿ ಎರಡನೆಯ ಕಂತೆಯಾಗಿ ಪ್ರಕಟಿಸಲಾಗಿದೆ. ಕನ್ನಡ ಸಾಹಿತ್ಯವನ್ನು ಕುರಿತ ಲೇಖನಗಳು ಈ ಸಂಪುಟದಲ್ಲಿವೆ. ಸಾಹಿತ್ಯ ಚರಿತ್ರೆ, ಪ್ರಾಚೀನ ಸಾಹಿತ್ಯದ ಅಧ್ಯಯನ, ಕವಿರಾಜಮಾರ್ಗ, ಪಂಪ, ಕನಕದಾಸ, ಬಿಎಂಶ್ರೀ, ಗೋವಿಂದ ಪೈ, ವಚನ ಚಳುವಳಿ, ಶೂನ್ಯ ಸಂಪಾದನೆ, ಅಭಿಜ್ಞಾನ ಶಾಕುಂತಲ, ಶಂಬಾ ಜೋಷಿ ಅವರನ್ನ ಕುರಿತ ಲೇಖನಗಳಿವೆ. ಎರಡನೆ ಭಾಗಲದಲ್ಲಿ ಮಲ್ಲಿಕಾ ಘಂಟಿ, ಗೋವಿಂದರಾಜು, ಮೂಲಮಾಧ್ಯಮಿಕಕಾರಿಕ ಸೇರಿದಂತೆ ಹಲವು ಪುಸ್ತಕಗಳಿಗೆ ಬರೆದ ಮುನ್ನುಡಿಗಳಿವೆ.
ಕೆ.ವಿ. ನಾರಾಯಣ ಅವರು ಕನ್ನಡದ ಪ್ರಮುಖ ಲೇಖಕರಾದ ಮಾಸ್ತಿ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಶಾಂತಿನಾಥ ದೇಸಾಯಿ ಅವರೊಂದಿಗೆ ನಡೆಸಿದ ಸಂದರ್ಶನಗಳ ಜೊತೆಗೆ ಆಶಾದೇವಿ ಮತ್ತು ಚಲಪತಿ ಅವರು ನಡೆಸಿದ ನಾರಾಯಣ ಅವರ ಸಂದರ್ಶನಗಳನ್ನು ಸೇರಿಸಲಾಗಿದೆ. ಕೊನೆಯ ’ವ್ಯಕ್ತಿಗಳು’ ಭಾಗಲ್ಲಿ ಮಾಸ್ತಿ, ಜಿ.ಎಸ್.ಎಸ್., ಚಿ.ಶ್ರೀನಿವಾಸರಾಜು ಅವರನ್ನು ಕುರಿತ ಲೇಖನಗಳಿವೆ. ಇದೊಂದು ಕನ್ನಡ ಸಾಹಿತ್ಯವನ್ನು ಕುರಿತ ಮಹತ್ವದ ಗ್ರಂಥ.
979381441879
Kannada Prose: ಕನ್ನಡ ಗದ್ಯ Kannada Literature: ಕನ್ನಡ ಸಾಹಿತ್ಯ Literature History: ಸಾಹಿತ್ಯದ ಚರಿತ್ರೆ