SHRINIVASA HAVANURA, Ed. ಶ್ರೀನಿವಾಸ ಹಾವನೂರ

Udupiya parisaradalli Pa Vem Acharyaru. ಉಡುಪಿಯ ಪರಿಸರದಲ್ಲಿ ಪಾ.ವೆಂ. ಆಚಾರ್ಯರು - Bengaluru Prasadhana Prakashana 2001 - 175

ಚಿಂತಕ ಪಾ.ವೆಂ. ಆಚಾರ್ಯರು ವಿದ್ವಾಂಸರು. ಲೋಕಶಿಕ್ಷಣ ಟ್ರಸ್ಟ್ ನಡೆಸುತ್ತಿರುವ ಕಸ್ತೂರಿ ಮಾಸ ಪತ್ರಿಕೆಯ ಸಂಪಾದಕರಾಗಿದ್ದರು. ಲಾಂಗೂಲಾಚಾರ್ಯರು ಎಂಬ ಕಾವ್ಯನಾಮದೊಂದಿಗೆ ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದ ಅವರು ಉಡುಪಿಯ ಶ್ರೀಕೃಷ್ಣ ಮಠದೊಂದಿಗೆ ಭಾವನಾತ್ಮಕ ಸಂಬಂಧವಿರಿಸಿಕೊಂಡಿದ್ದರು. ಈ ಕೃತಿಯಲ್ಲಿ ಶ್ರೀಕೃಷ್ಣ ಮಠದ ಪರಿಸರ, ವ್ಯಕ್ತಿಚಿತ್ರಗಳು, ಶಬ್ದವಿಹಾರ ಹಾಗೂ ನೆನಹುಗಳು ಹೀಗೆ ನಾಲ್ಕು ವಿಭಾಗಗಳನ್ನು ಮಾಡಿದ್ದು, ಮೊದಲನೆಯದರಲ್ಲಿ ಹುಲಿ ಕೊಂದ ಸ್ವಾಮಿಗಳು, ಮಠಾಧಿಪತ್ಯಕ್ಕೆ ಮೇಲಾಟವಿರಲಿಲ್ಲ, ರಥದಿಂದ ಧುಮುಕಿದ ಸ್ವಾಮಿಗಳು, ಸೋದೆಯ ನೆನಪುಗಳು ಇತ್ಯಾದಿ, ಎರಡನೆಯದರಲ್ಲಿ; ಗೋವಿಂದ ಪೈಗಳೊಂದಿಗೆ, ಶಿವರಾಮ ಕಾರಂತ ಪ್ರಪಂಚ, ಡಾ. ಟಿ. ಮಾಧವ ಪೈ, ಉಡುಪಿಯ ಕೆಲ ಪತ್ರಕರ್ತರು ಇತ್ಯಾದಿ ಮೂರನೇಯದರಲ್ಲಿ; ಸಾಮಾನ್ಯ ತುಳು ಬ್ರಾಹ್ಮಣ ತುಳು, ಪುತ್ತೂರು ಶಬ್ದ ವಿವೇಚನೆ, ಶಿವಳ್ಳಿ ಮತ್ತು ಶಿವರೂಪ ಇತ್ಯಾದಿ ಹಾಗೂ ನಾಲ್ಕನೆಯದರಲ್ಲಿ; ನನ್ನ ಪತಿ (ಲಕ್ಷ್ಮಿಬಾಯಿ ಪಾವೆಂ), ನನ್ನ ಉಡುಪಿಯ ಜೀವನ (ಪಾ.ವೆಂ), ಬದಲಾಗಿದೆ ಉಡುಪಿ ಇತ್ಯಾದಿ ಲೇಖನಗಳಿವೆ.


Udupi Pa Vem Acharya

K894.8 SHRP