Karnataka sharanakathamrata ಕರ್ನಾಟಕ ಶರಣ ಕಥಾಮೃತ
Material type:
- K894.9 TIPK
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.9 TIPK (Browse shelf(Opens below)) | Available | 068273 |
Browsing St Aloysius Library shelves, Collection: Kannada Close shelf browser (Hides shelf browser)
ಕರ್ನಾಟಕದ ಶರಣ ಪರಂಪರೆಯ ಕೆಲವು ಶರಣರ ಮೂಲಕ ಪರಂಪರೆಯ ವೈವಿಧ್ಯವನ್ನೂ ಅದರ ಹಿಂದಿರುವ ಏಕಸೂತ್ರತೆಯನ್ನೂ ಪರಿಚಯ ಮಾಡಿಕೊಡಲು ಲೇಖಕರು ಪ್ರಯತ್ನಿಸಿದ್ದಾರೆ. ಶರಣ ಸಾಹಿತ್ಯದ ಹಾಗೂ ಶರಣರ ಆಧ್ಯಾತ್ಮಿಕ ಆಂದೋಲನದ ಕಾಲ 12ನೇ ಶತಮಾನವಾದರೂ ಅದಕ್ಕಿಂತ ಹಿಂದೆಯೇ ಈ ಪರಂಪರೆ ಆರಂಭವಾಯಿತು. ಅದು ಬೆಳೆದದ್ದು ಬಸವ ಯುಗ ದಲ್ಲಿ. ಆದುದರಿಂದ ಈ ಶರಣಕಥಾಮೃತದಲ್ಲಿ ಆ ಕಾಲಕ್ಕೆ ಸೇರಿದ ಶರಣರು ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಪುಸ್ತಕದಲ್ಲಿ ಆರಿಸಿ 22 ಜನ ಶರಣರಲ್ಲಿ 12ನೇ ಶತಮಾನಕ್ಕೆ ಸೇರಿದವರು 12 ಜನ; ಬಸವಪೂರ್ವ ಯುಗದವರು ಇಬ್ಬರು; ಅನಂತರದವರು ಎಂಟು ಜನ. ಶರಣರ ಸಾಧನೆಯ ವ್ಯಾಪಕತೆ, ವೈವಿಧ್ಯ, ವೈಶಿಷ್ಟ್ಯ ಕಂಡುಕೊಳ್ಳಲು ಸಹಾಯ ಆಗಬೇಕು ಎಂಬುದು ಇಲ್ಲಿನ ಶರಣರ ಆಯ್ಕೆಯಲ್ಲಿರುವ ಆಶಯ. ಇಲ್ಲಿರುವವರೆಲ್ಲಾ ಯುಗಧರ್ಮದ ಹಠವನ್ನೂ, ಪರಿಮಿತಿಯನ್ನೂ ಮೀರಿ ಬೆಳೆದು ತಮ್ಮ ಮಹೋನ್ನತ ಜೀವನದಿಂದ ಸಮಷ್ಟಿ ಜನಜೀವನಕ್ಕೆ ಒಂದು ದಾರ್ಶನಿಕ ಶ್ರೀಮಂತಿಕೆಯನ್ನು ತಂದುಕೊಟ್ಟವರು, ಒಂದು ಕಾಲದಲ್ಲಿದ್ದರೂ ಆ ಕಾಲವನ್ನು ಮೀರಿದವರು; ಒಂದು ಧರ್ಮದ ಪರಿಸರದಲ್ಲಿದ್ದರೂ ಅದನ್ನು ದಾಟಿದವರು; ಎಲ್ಲ ಕಾಲಕ್ಕೂ ಅನ್ವಯವಾಗುವ ಮಾನವ ಧರ್ಮದ ಮೂಲ ಮೌಲ್ಯಗಳನ್ನು ಜೀವನದಲ್ಲಿ ಸಾಧಿಸಿ ತೋರಿಸಿದ ಅನುಭಾವಿಗಳು.
There are no comments on this title.