Bhanumatiya netta: Pampabharatada padyavondannadharisida samvada sanchaya ಭಾನುಮತಿಯ ನೆತ್ತ – ಪಂಪಭಾರತದ ಪದ್ಯವೊಂದನ್ನಾಧರಿಸಿದ ಸಂವಾದ
Material type:
- 81866668764
- K894.109 PADB
Item type | Current library | Collection | Call number | Status | Barcode | |
---|---|---|---|---|---|---|
![]() |
St Aloysius Library | Kannada | K894.109 PADB (Browse shelf(Opens below)) | Available | 067330 |
Browsing St Aloysius Library shelves Close shelf browser (Hides shelf browser)
ಆದಿಕವಿ ಪಂಪನ ಕೃತಿಗಳ ವಿಮರ್ಶೆ ಇಂದೂ ಕೊನೆ ಮುಟ್ಟಿಲ್ಲ. ಇನ್ನೂ ಮಟ್ಟುವಂತಿಲ್ಲ. ಸಹಜ ಕವಿಯೂ , ವಿದ್ವತ್ಕವಿಯೂ ಆದ ಪಂಪನಂತವರ ಕೃತಿಯ ಕುರಿತು ಕೊನೆಯ ಮಾತನ್ನು ಹೇಳಲು ಸಾಧ್ಯವೂ ಇಲ್ಲ . ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲಭ್ಯವಿರುವ ದಾಖಲೆಗಳಲ್ಲಿ ಸುಮಾರು 70 ವರ್ಷಕ್ಕಿಂತಲೂ ಮೇಲ್ಪಟ್ಟು ಕಾಲ ಪಂಪನ ಒಂದು ಪದ್ಯ ಸುದೀರ್ಘ ಚರ್ಚೆಯನ್ನು ಹುಟ್ಟುಹಾಕಿತು.
ವಿಕ್ರಮಾರ್ಜುನ ವಿಜಯದ ಒಂಬತ್ತನೇ ಆಶ್ವಾಸದ ಈ ಅರವತ್ತೊಂಬತ್ತನೇ ಪದ್ಯವನ್ನು ಎಸ್. ವಿ ರಂಗಣ್ಣ ಆದಿಯಾಗಿ ಇತ್ತೀಚಿನ ತನಕವೂ ಕನ್ನಡದ ಹಲವಾರು ಪ್ರಮುಖ ವಿದ್ವಾಂಸರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಬೇರೆ ಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ . ಬಹುಕಾಲ ವಿದ್ವಾಂಸರ ಮಧ್ಯೆ ವಿವಾದ, ಚರ್ಚೆಗೆ ಕಾರಣವಾಗಿದ್ದ ಈ ಪದ್ಯಕ್ಕೆ ಕೊನೆಗೆ ದಿ. ಸೇಡಿಯಾಪು ಕೃಷ್ಣ ಭಟ್ಟರು ನೀಡಿದ ವ್ಯಾಖ್ಯಾನ ಕೊನೆಯ ಮಾತಾಗಿ ಈ ವರೆಗೆ ನಿಂತಿದೆ.
ಇದುವರೆಗೆ ಈ ಒಂದು ಪದ್ಯದ ಕುರಿತಾಗಿ ವಿವಿಧ ಲೇಖಕರು ಬರೆದದ್ದೆಲ್ಲವನ್ನು ಒಂದೆಡೆ ಸೇರಿಸಿ , ಕಾಲಾನುಕ್ರಮವಾಗಿ ಜೋಡಿಸಿ , ಸಂದರ್ಭಯೋಚಿತವಾದ ಹಾಗೂ ವಿಮರ್ಶಾತ್ಮಕವಾದ ಟಿಪ್ಪಣಿ – ಪ್ರಸ್ತಾವಣೆಯಿಂದ ಪುಷ್ಟಿಗೊಳಿಸಿ ಪುಸ್ತಕ ರೂಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ‘ಭಾನುಮತಿಯ ನೆತ್ತ’ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ . ಪಾದೇಕಲ್ಲು ವಿಷ್ಣು ಭಟ್ ಇದರ ಸಂಪಾದಕರು.
There are no comments on this title.