Image from Google Jackets

Bhanumatiya netta: Pampabharatada padyavondannadharisida samvada sanchaya ಭಾನುಮತಿಯ ನೆತ್ತ – ಪಂಪಭಾರತದ ಪದ್ಯವೊಂದನ್ನಾಧರಿಸಿದ ಸಂವಾದ

By: Material type: TextTextLanguage: Kannada Publication details: Udupi Rashtrakakvi Govinda Pai Samshodhana Kendra 2012Description: 352ISBN:
  • 81866668764
Subject(s): DDC classification:
  • K894.109 PADB
Summary: ಆದಿಕವಿ ಪಂಪನ ಕೃತಿಗಳ ವಿಮರ್ಶೆ ಇಂದೂ ಕೊನೆ ಮುಟ್ಟಿಲ್ಲ. ಇನ್ನೂ ಮಟ್ಟುವಂತಿಲ್ಲ. ಸಹಜ ಕವಿಯೂ , ವಿದ್ವತ್ಕವಿಯೂ ಆದ ಪಂಪನಂತವರ ಕೃತಿಯ ಕುರಿತು ಕೊನೆಯ ಮಾತನ್ನು ಹೇಳಲು ಸಾಧ್ಯವೂ ಇಲ್ಲ . ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲಭ್ಯವಿರುವ ದಾಖಲೆಗಳಲ್ಲಿ ಸುಮಾರು 70 ವರ್ಷಕ್ಕಿಂತಲೂ ಮೇಲ್ಪಟ್ಟು ಕಾಲ ಪಂಪನ ಒಂದು ಪದ್ಯ ಸುದೀರ್ಘ ಚರ್ಚೆಯನ್ನು ಹುಟ್ಟುಹಾಕಿತು. ವಿಕ್ರಮಾರ್ಜುನ ವಿಜಯದ ಒಂಬತ್ತನೇ ಆಶ್ವಾಸದ ಈ ಅರವತ್ತೊಂಬತ್ತನೇ ಪದ್ಯವನ್ನು ಎಸ್. ವಿ ರಂಗಣ್ಣ ಆದಿಯಾಗಿ ಇತ್ತೀಚಿನ ತನಕವೂ ಕನ್ನಡದ ಹಲವಾರು ಪ್ರಮುಖ ವಿದ್ವಾಂಸರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಬೇರೆ ಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ . ಬಹುಕಾಲ ವಿದ್ವಾಂಸರ ಮಧ್ಯೆ ವಿವಾದ, ಚರ್ಚೆಗೆ ಕಾರಣವಾಗಿದ್ದ ಈ ಪದ್ಯಕ್ಕೆ ಕೊನೆಗೆ ದಿ. ಸೇಡಿಯಾಪು ಕೃಷ್ಣ ಭಟ್ಟರು ನೀಡಿದ ವ್ಯಾಖ್ಯಾನ ಕೊನೆಯ ಮಾತಾಗಿ ಈ ವರೆಗೆ ನಿಂತಿದೆ. ಇದುವರೆಗೆ ಈ ಒಂದು ಪದ್ಯದ ಕುರಿತಾಗಿ ವಿವಿಧ ಲೇಖಕರು ಬರೆದದ್ದೆಲ್ಲವನ್ನು ಒಂದೆಡೆ ಸೇರಿಸಿ , ಕಾಲಾನುಕ್ರಮವಾಗಿ ಜೋಡಿಸಿ , ಸಂದರ್ಭಯೋಚಿತವಾದ ಹಾಗೂ ವಿಮರ್ಶಾತ್ಮಕವಾದ ಟಿಪ್ಪಣಿ – ಪ್ರಸ್ತಾವಣೆಯಿಂದ ಪುಷ್ಟಿಗೊಳಿಸಿ ಪುಸ್ತಕ ರೂಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ‘ಭಾನುಮತಿಯ ನೆತ್ತ’ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ . ಪಾದೇಕಲ್ಲು ವಿಷ್ಣು ಭಟ್ ಇದರ ಸಂಪಾದಕರು.
Tags from this library: No tags from this library for this title. Log in to add tags.
Star ratings
    Average rating: 0.0 (0 votes)

ಆದಿಕವಿ ಪಂಪನ ಕೃತಿಗಳ ವಿಮರ್ಶೆ ಇಂದೂ ಕೊನೆ ಮುಟ್ಟಿಲ್ಲ. ಇನ್ನೂ ಮಟ್ಟುವಂತಿಲ್ಲ. ಸಹಜ ಕವಿಯೂ , ವಿದ್ವತ್ಕವಿಯೂ ಆದ ಪಂಪನಂತವರ ಕೃತಿಯ ಕುರಿತು ಕೊನೆಯ ಮಾತನ್ನು ಹೇಳಲು ಸಾಧ್ಯವೂ ಇಲ್ಲ . ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಲಭ್ಯವಿರುವ ದಾಖಲೆಗಳಲ್ಲಿ ಸುಮಾರು 70 ವರ್ಷಕ್ಕಿಂತಲೂ ಮೇಲ್ಪಟ್ಟು ಕಾಲ ಪಂಪನ ಒಂದು ಪದ್ಯ ಸುದೀರ್ಘ ಚರ್ಚೆಯನ್ನು ಹುಟ್ಟುಹಾಕಿತು.

ವಿಕ್ರಮಾರ್ಜುನ ವಿಜಯದ ಒಂಬತ್ತನೇ ಆಶ್ವಾಸದ ಈ ಅರವತ್ತೊಂಬತ್ತನೇ ಪದ್ಯವನ್ನು ಎಸ್. ವಿ ರಂಗಣ್ಣ ಆದಿಯಾಗಿ ಇತ್ತೀಚಿನ ತನಕವೂ ಕನ್ನಡದ ಹಲವಾರು ಪ್ರಮುಖ ವಿದ್ವಾಂಸರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಬೇರೆ ಬೇರೆ ಅರ್ಥಗಳನ್ನು ಕೊಟ್ಟಿದ್ದಾರೆ . ಬಹುಕಾಲ ವಿದ್ವಾಂಸರ ಮಧ್ಯೆ ವಿವಾದ, ಚರ್ಚೆಗೆ ಕಾರಣವಾಗಿದ್ದ ಈ ಪದ್ಯಕ್ಕೆ ಕೊನೆಗೆ ದಿ. ಸೇಡಿಯಾಪು ಕೃಷ್ಣ ಭಟ್ಟರು ನೀಡಿದ ವ್ಯಾಖ್ಯಾನ ಕೊನೆಯ ಮಾತಾಗಿ ಈ ವರೆಗೆ ನಿಂತಿದೆ.

ಇದುವರೆಗೆ ಈ ಒಂದು ಪದ್ಯದ ಕುರಿತಾಗಿ ವಿವಿಧ ಲೇಖಕರು ಬರೆದದ್ದೆಲ್ಲವನ್ನು ಒಂದೆಡೆ ಸೇರಿಸಿ , ಕಾಲಾನುಕ್ರಮವಾಗಿ ಜೋಡಿಸಿ , ಸಂದರ್ಭಯೋಚಿತವಾದ ಹಾಗೂ ವಿಮರ್ಶಾತ್ಮಕವಾದ ಟಿಪ್ಪಣಿ – ಪ್ರಸ್ತಾವಣೆಯಿಂದ ಪುಷ್ಟಿಗೊಳಿಸಿ ಪುಸ್ತಕ ರೂಪದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ‘ಭಾನುಮತಿಯ ನೆತ್ತ’ ಎಂಬ ಹೆಸರಿನ ಪುಸ್ತಕ ರೂಪದಲ್ಲಿ ಪ್ರಕಟಿಸಿದೆ . ಪಾದೇಕಲ್ಲು ವಿಷ್ಣು ಭಟ್ ಇದರ ಸಂಪಾದಕರು.

There are no comments on this title.

to post a comment.