Tukrana kanasu. ತುಕ್ರನ ಕನಸು

CHANDRASHEKHARA KAMBARA. ಚಂದ್ರಶೇಖರ ಕಂಬಾರ

Tukrana kanasu. ತುಕ್ರನ ಕನಸು - Sagara Akshara Prakashana 1992 - viii,86

'ತುಕ್ರನ ಕನಸು' ನ್ಯಾಯ ಮತ್ತು ಸಮಾನತೆಯುಳ್ಳ ವ್ಯವಸ್ಥೆಯ ಹುಡುಕಾಟ ಕುರಿತಾದದ್ದು. ತುಕ್ರನ ಮಾತಿನಲ್ಲೇ ಹೇಳುವುದಾದರೆ 'ಅವನು ಎಷ್ಟೋ ವರ್ಷಗಳಿಂದ ಈ ಭೂಮಿ ಕಂಡ ಕನಸು ಈ ಭೂಮಿ ಉಂಡ ನೋವು, ಈ ನೆಲಕ್ಕಾದ ಗಾಯ'. ಇಂಥ ಸ್ಥಿತಿಯಲ್ಲಿರುವ ತುಕ್ರ ಈ ಸ್ಥಿತಿಯನ್ನು ಮೀರಲು ನಡೆಸುವ ಪ್ರಯತ್ನ, ಹುಡುಕುವ ಸಾಧ್ಯತೆಗಳೇ ಈ ನಾಟಕದ ಕಥಾ ವಸ್ತು.

ಪಟೇಲ ಮತ್ತು ಶಾನಭೋಗರ ಕಾಲಕೋಶದಲ್ಲಿ ತನ್ನ ಹೆಸರು ಇರುವುದೆ ? ಎಂಬ ಸಂದೇಹ ತುಕ್ರನದು. ಟಗರಿನ ಕಾಳಗದಲ್ಲಿ ಗೆದ್ದಿರುವ ತುಕ್ರನ ಹಣವನ್ನೆಲ್ಲ ಜನರು ದೋಚಿದಾಗ ಹಂಚಲು ಇಟ್ಟುಕೊಂಡಿದ್ದ ಮೂರ್ಖತನವೆಲ್ಲ

ಹೊಯಿತೆಂದು ಖುಷಿಪಡುತ್ತಾನೆ. ಜೀವನದಲ್ಲಿ ಬೇಸತ್ತು ಸಾಯಲು ನಿರ್ಧರಿಸುವ ತುಕ್ರ ಅದಕ್ಕಾಗಿ ತನ್ನ ಗೋರಿಯನ್ನು ತಾನೇ ತೋಡಿಸುತ್ತಾನೆ. ಅದರಲ್ಲಿ ಇಳಿಯಬೇಕೆನ್ನುವಾಗಲೇ ಜೀವನದಲ್ಲಿ ನನಗೆ ಭಾರಿ ನಂಬಿಕೆ ಬಂದು ಬಿಟ್ಟಿದೆ ಎಂದು ಹೇಳುತ್ತ ಬೆಂಗಳೂರಿಗೆ ಹೋಗುತ್ತಾನೆ. ನಗರ ಜೀವನದ ಆಡಂಬರ ಮೈಗೂಡಿಸಿಕೊಂಡು ನಾಗರಿಕನಾಗಿ ಮರಳಿ ತುಕ್ರ ತನ್ನೂರಿಗೆ ಮರಳುತ್ತಾನೆ. ಸಾಂತನೆಂಬ ಕಳ್ಳನ ಜೊತೆಯಲ್ಲಿ ಸೇರಿ ಪಟೇಲನ ಮನೆ ದೋಚಲು ಯೋಜನೆ ರೂಪಿಸುತ್ತಾನೆ. ತುಕ್ರ ಕನಸಿನಲ್ಲಿ ಭಾರತಾಂಬೆಯನ್ನು ರಕ್ಷಿಸುವುದು, ಪಟೇಲನನ್ನು ಶಿಕ್ಷಿಸುವುದು, ತಾರಾ ಮೇಡಂಳನ್ನು ಪ್ರೀತಿಸುವುದು ಎಂಬಂತೆ ಕನಸು ಕಾಣುತ್ತಾನೆ. ಸಾಂತನ ಗುಂಪು ತುಕ್ರನಿಗೆ ಗೊತ್ತಾಗದ ಹಾಗೆ, ಪಟೇಲನ ಮನೆ ದರೋಡೆ ಮಾಡುತ್ತದೆ. ಮಲಗಿ ಕನಸು ಕಾಣುತ್ತಿರುವ ತುಕ್ರನನ್ನು ಬಂಧಿಸಿ ಗಲ್ಲಿಗೇರಿಸುವುದರೊಂದಿಗೆ ನಾಟಕ ಮುಗಿಯುತ್ತದೆ.

K894.2 CHAT